Wednesday, July 26, 2006

ಜಾರಕೀ ಹೊಳೀನೂ ಕಾಂಗ್ರೇಸ್ ಸೇರಿಕೋತಾರಂತೆ, ಗೊತ್ತೇ ಇರಲಿಲ್ಲಾ!

ನ್ಯಾಯದ ಮೇಲೆ ರಾಜಕಾರಣಿಗಳು ನಂಬ್ಕೆ ಇಟ್‌ಗೊಂತಾರ ಅಂತ ಕೇಳಿದ್ರೆ, ಯಾಕಿಲ್ಲ ಅಂತಾರೆ ನಮ್ ಜಾರಕೀ ಹೊಳಿ ಸಾಹೇಬ್ರು! ಅದ್ಯಾಕ್ ಅಂತೀರಿ, ಕೋಮುವಾದಿ ಶಕ್ತಿ ಇರೋ ಪಕ್ಷದ್ ಸವಾಸ ಯಾವನಿಗ್ರೀ ಬೇಕು, ನ್ಯಾಯ, ನೀತಿ, ನಂಬ್ಕೆ ಇರೋಂಥ ಪಕ್ಷ, ಅದೂ ಲಾಲಾ ನೆಹ್ರೂ ಕಟ್ಟಿರೋಂಥ ಕಾಂಗ್ರೇಸ್ ಇರಬೇಕಾದ್ರೆ?

ಛೇ, ದೇವೇ ಗೌಡ್ರು ಮಗ ಕುಮಾರಸ್ವಾಮಿ ಎಲ್ಲಾರೂ ಲಂಚ ತಗೊಳ್ಳೋದ್ ಉಂಟೇ, ಅವರಪ್ಪ ತಗೊಂಡ್ ತಗೊಂಡ್ ಹಾಕಿದ್ದೇ ಕೊಳ್ತು ಬಿದ್ದಿರೋವಾಗ! ಅದೂ ಒಂದಲ್ಲ, ಎರಡಲ್ಲ ನೂರಾ ಐವತ್ತು ಕೋಟಿಯಂತೆ - ಎಂಥಾ ಕಾಲ ಬಂತಪ್ಪಾ ಶಿವನೇ.
ನ್ಯಾಯ ನೀತಿ ಇರೋ ಎಲ್ಲಾ ರಾಜಕಾರಣಿಗಳೂ ರಾಜೀನಾಮೆ ಕೊಟ್‌ಗಳ್ಲಿ, ಹಂಗೇ ಕಾಂಗ್ರೇಸ್ ಸೇರಿಕ್ಯಳ್ಳಿ, ಇತ್ಲಾಗ್ ವಿರೋಧ್ ಪಕ್ಷದಾಗ್ ಇರೋರ್ ಯಾರು?

ಹೂ, ಜಾರಕೀಹೊಳಿ ಅನ್ನೋದನ್ನ ಇಂಗ್ಲೀಷಿಗೆ ತರ್ಜುಮೆ ಮಾಡಿದ್ರೆ ಏನ್ ಬರ್ತದಪ್ಪಾ, ಅವರ ಮಾತು, ನೀತಿ ಹಾಗೆ slippery ಇರೋದಂತೂ ಖರೆ!

# posted by Satish : 11:14 am
Comments: Post a Comment



<< Home

This page is powered by Blogger. Isn't yours?

Links
Archives