Thursday, July 27, 2006

ಭೂಮಿ ಕೊರಕರು, ಸಿಕ್ಕಿ ಬಿದ್ದರು!

'ಅದೆಲ್ಲಿ ಶಿವಾ ಭೂಮೀನ ದೊಡ್ಡದಾಗಿ ಕೊರದಾರಂತಾs' ಎಂದು ಎಲ್ಲಿಂದಲೋ ಧ್ವನಿಯೊಂದು ಅಶರೀರವಾಣಿಯಾಗಿ ಕೇಳಿಸಿದ ಹೊತ್ತಿಗೆ ನೋಡಪ್ಪಾ ಗೌಡರ ಪಾಳ್ಯದಾಗ ನಿಜವಾಗೂ ಗದ್ದಲ ಶುರುವಾಗಿದ್ದು. ಈಗೇನ್ ಮಾಡ್ತಾನಂತ ಅಪ್ಪ, ಯಾರಪ್ಪಾ? ಅದೇ ಅವರಪ್ಪ, ಕುಮಾರಪ್ಪನ ಅಪ್ಪ!

ಅಯ್ಯೋ ಅಯ್ಯೋ ಅಯ್ಯೋ ಒಂದಾ ಎರಡಾ ನೂರಾ ಐವತ್ತು ಕೋಟಿ ವಸೂಲಿ ಮಾಡ್ಯಾರಂತs, ಅತ್ಲಾಗ ಚತುರ್ವೇದಿ ಸಾಹೇಬರಿಗೆ ಅದರಾಗ ಒಂದಿಷ್ಟು ಕೊಟ್ಟು ಕುಂದಿರಿಸಿದ್ದರೆ ಚೆನ್ನಾಗಿತ್ತು ನೋಡ್.

ಕೆಟ್ಟಕಾಲ ಬಂತು ಶಿವಾ, ಇನ್ನೇನು ಮತ್ತೆ ಈ ವರ್ಷದ ಕೊನಿ ಒಳಗೆ ಕುಸಾ ಸರ್ಕಾರ ಬೀಳ್ಲಿಲ್ಲ ನೋಡ್ಯಕ್ಯಂತಿರು, ಭೂಮೀನ ಕೊರೆದಿದ್ದಾತು, ಅತ್ಲಾಗ್ ಚಂದ್ರಲೋಕಕ್ಕೂ ಇಟ್ರೂ ಇಡಬೋದು ಬೆಂಕೀನ, ಇವರ ದೊಡ್ಡಾಟನೆಲ್ಲ ಯಾರು ಕಂಡೋರು ಶಿವಾ.

ಸರ್ಕಾರ ಬಿತ್ತು ಅಂದ್ರೆ, ಮತ್ತ ಎಲೆಕ್ಷನ್ನೂ ಅಂತ ಬರತಾರಪಾ. ಮತ್ತ ಸರ್ಕಾರ ಬೀಳ್ತದಪಾ. ಇದು ಒಂದು ರೀತಿ ಚಕ್ರದ್ ಗತಿ ಆತು ಅಂದೆ!

# posted by Satish : 11:14 am
Comments: Post a Comment



<< Home

This page is powered by Blogger. Isn't yours?

Links
Archives