Wednesday, August 02, 2006

ದೇವರಾಣೆಗೂ ನಾನೇನೂ ತಪ್ ಮಾಡಿಲ್ಲ!

ಪಾಪ, ಕುಸಾ ಸಾಹೇಬ್ರು ಈ ಪತ್ರಿಕೆಯೋರ್ನ ಎದುರ್ಸಿ ಎದುರ್ಸಿ ಸಾಕಾಗಿ ಕೊನೆಗೆ 'ನಾನೇನೂ ಮಾಡಿಲ್ಲ' ಅಂತ ಹೇಳ್ಕೆ ಕೊಡೋ ಸ್ಥಿತಿಗ್ ಬಂದೋಯ್ತು! ಅಲ್ಲಾ ಸಾರ್, ಒಬ್ಬ ಮುಖ್ಯಂತ್ರಿ ಅಂತ್ ಆದ್ ಮೇಲೆ ಇದು ತಮ್ಮ ವೈಯುಕ್ತಿಕ ವಿಷ್ಯ ಆಗೋದಿಲ್ಲ ಅಲ್ವ್‌ರಾ? ನೀವು ನಾಡಿಗ್ ದೊಡ್ಡೋರು, ಯಾರ್ಯಾರು ತಪ್ಪ್ ಮಾಡಿದ್ರೂ ಅವರ್ನೆಲ್ಲ ಹಿಡಿದು ಒತ್ತಟ್ಟಿಗೆ ತಳ್‌ಬೇಕಾದೋರು... ಸರಿ ನೀವೇನೋ ತಪ್ ಮಾಡಿಲ್ಲಪಾ, ತಪ್ ಯಾರ್ ಮಾಡೋವ್‌ರೆ ಅಂತಾನಾದ್ರೂ ಗೊತ್ತಾ? ಅಕಸ್ಮಾತ್ ಗೊತ್ತಿದ್ರೆ, ಅದನ್ನ ನೋಡಿಕೊಂಡ್ ಸುಮ್ಮನಿದ್ರೂ ಅದೂ ತಪ್ಪ್ ಅಲ್ವಾ ಸಾರ್?

ಯಾರೋ ತಪ್ ಮಾಡವ್ರಲ್ವಾ, ಯಾರದು? ನಮ್ ಸಂಡೂರಿನ್ ಮಣ್ಣೆಲ್ಲ ಎಲ್ಲಿಗೋಯ್ತು? ಕಬ್ಬಿಣಾ ತೆಗೆದು ಚಿನ್ನಾ ಯಾರ್ಯಾರು ಮಾಡ್ಕೊಂಡ್ರು, ಇದಕ್ಕೆಲ್ಲ ಏನ್ ತನಿಖೆ ನಡೀತಿದೆ? ನಮ್ ಚತುರ್ವೇದಿ ಸಾಹೇಬ್ರು ಏನ್ ಬರದವ್ರೆ? ನೀವೇನೋ ದೇವ್ರು ಮೇಲ್ ಪ್ರಮಾಣ್ ಮಾಡಿದ್ರಿ, ಆದ್ರೆ ನಮ್ಮಂತ ಆಮ್ ಜನ ಏನ್ ಮಾಡ್‌ಬೇಕು?

ನಾನೇನೂ ಔಷಧಿ ತಗೊಂಡಿಲ್ಲ ಅನ್ನೋ 'ಸತ್ಯ' ಹೇಳ್ದ ಲ್ಯಾಂಡಿಸ್ ಈಗ ತಾನೇ ಎಕ್ಸ್‌ಪ್ಲೇನ್ ಮಾಡೋ ಪರಿಸ್ಥಿತಿ ಬಂದಿದೆ ನೋಡಿ - ಓಪನ್ ಆಗಿ ಪ್ರಮಾಣ ಮಾಡೋದು ಬಹಳ ಡೇಂಜರಸ್ಸು!

# posted by Satish : 5:05 pm
Comments: Post a Comment



<< Home

This page is powered by Blogger. Isn't yours?

Links
Archives