Thursday, August 03, 2006

ಕರ್ನಾಟಕದ ಸಮಸ್ಯೆಗಳನ್ನು ಏಕ್ ದಂ ಕಡಿಮೆ ಮಾಡೋ ಉಪಾಯ?

ನಮ್ಮ ಅಕ್ಕ ಪಕ್ಕದ ರಾಜ್ಯಗಳು ದೆಹಲಿಯಲ್ಲಿ ಯಾವುದೇ ಸರ್ಕಾರವಿದ್ದರೂ ಪದೇಪದೇ ಕೇಂದ್ರಕ್ಕೆ ತಮ್ಮ ಗಡಿ ಬೇಡಿಕೆಗಳನ್ನು ಇಡುತ್ತಲೇ ಬಂದಿವೆಯೆಲ್ಲಾ ಈ ಹಿನ್ನೆಲೆಯಲ್ಲಿ ನಮ್ಮ ಗಡಿಯಲ್ಲಿರುವ ಭಾಗಗಳನ್ನೆಲ್ಲ ಒಂದೊಂದಾಗೇ ಹಂಚಿಕೊಂಡು ಬಂದರೆ ಮೊದಲು ಕರ್ನಾಟಕ ಸಣ್ಣದಾಗುತ್ತದೆ, ಆಗಲಾದರೂ ಸಮಸ್ಯೆಗಳು ಕಡಿಮೆಯಾಗಬೇಕು, ಒಂದು ವೇಳೆ ಹಾಗೆ ಕಡಿಮೆಯಾಗದೇ ಹೋದಲ್ಲಿ ರೈಲಿನಲ್ಲಿ ಲಾಸ್ಟ್ ಡಬ್ಬಿಯನ್ನು ತೆಗೆದ ಹಾಗೆ ಎಲ್ಲ ಭಾಗಗಳನ್ನು ಕೊಟ್ಟು ಕರ್ನಾಟಕವನ್ನ ಡಿಸಾಲ್ವ್ ಮಾಡಿದರೆ ಹೇಗೆ?!

'ಏಕೆ ಭಕ್ತಾ, ಕರ್ನಾಟಕದ ಸಮಸ್ಯೆಗಳನ್ನು ಕಂಡು ಅಷ್ಟೊಂದು ಮನ ಕರಗಿದೆಯೇ?' ಎಂದು ತಾಯಿ ಭುವನೇಶ್ವರಿ ತಲೆಯ ಮೇಲೆ ಟಪ್ಪನೆ ಹೊಡೆದು ಕೇಳಿದ ಹಾಗಾಯಿತು.

'ಇಲ್ಲಾ ಅಮ್ಮಾ, ಮತ್ತೇನು ಹೇಳಲಿ, ನಮ್ಮ ನೆರೆ ಹೊರೆಯವರು ನಿಯೋಗಗಳನ್ನು ನಡೆಸಿಕೊಂಡು ಹೋಗಿ ಬರೋದರ ಸಂಚೇನು? ಉಳಿದವರೆಲ್ಲರೂ ಇನ್ನೇನೇನನ್ನೋ ಸೆಲೆಬ್ರೇಟ್ ಮಾಡಿಕೊಂಡು ಖುಷಿಯಲ್ಲಿದ್ದರೆ ನಾವು ನಮ್ಮ ಸರ್ಕಾರ ೬ ತಿಂಗಳನ್ನು ಯಶಸ್ವಿಯಾಗಿ ಕಳೆದಿದೆ ಎಂದು ಚಪ್ಪಾಳೆ ತಟ್ಟುವುದೇಕೆ?' ಎಂದು ಪ್ರಶ್ನಿಸುತ್ತಿದ್ದಂತೆ ಕನ್ನಡಮ್ಮ 'ಥೂ, ರಾಜಕೀಯದ ಬಗ್ಗೆ ಮಾತಾಡ್ತೀಯಾ ಹೊಲಸು ಬಡ್ಡೀಮಗನೆ!' ಎಂದು ಮಾಯವಾದರೆ, 'ಕುಸಾ ಕೇಳ್ಕ ಹೋಗಲೇ...' ಎಂದು ಯಾರೋ ಹಿಂದಿನಿಂದ ತಿವಿದಂತಾಯಿತು.

# posted by Satish : 6:00 pm
Comments:
ಕಾಳೂ ಅವರೆ,
ಏನು ಸ್ವಾಮಿ....
ಅಷ್ಟೂ ಅರ್ಥಾ ಆಗಾಕಿಲ್ವಾ....
ಈ ಬಡ್ಡೀ ಹೈಕಳಿಗೆ ಸರ್ಕಾರದ್ ಖಜಾನೆ ದೋಚೋದರ ಮಧ್ಯೆ ರಾಜ್ಯದ್ ಹಿತಾಸಕ್ತಿ ಮ್ಯಾಲೆ ಗಮ್ನಾ ಕೊಡೋಕೆ ಪುರುಸೊತ್ತಾದ್ರೂ ಎಲ್ಲೀ ಇದೆ?
 
ಖಜಾನೆ ದೋಚಿ ಅದರಲ್ಲಿ ನಮಗೂ ಸ್ವಲ್ಪ ಹಂಚಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು!
 
Post a Comment



<< Home

This page is powered by Blogger. Isn't yours?

Links
Archives