Monday, August 07, 2006

ಧರಮ್ ಸಾಹೇಬ್ರಿಗೂ ಮಾತಾಡೋಕ್ ಬರತ್ತೆ...

"ರಾಜಿ ಸಂಧಾನದ ಮೂಲಕ ಬಗೆ ಹರಿಸೋಕೆ ಗಣಿ ಹಗರಣವೇನು ವರ ಮಹಾಲಕ್ಷ್ಮಿ ಪೂಜೆಯೇ?" ಎಂದು ಪ್ರಶ್ನೆ ಕೇಳಿದ್ದಾರಂತೆ! ಅದೂ ಬೆಂಗಳೂರಿನಲ್ಲೂ ಅಲ್ಲ, ಬಿಸಿಲಿನ ಜಳದಿಂದ ಕಾದಿರೋ ಗುಲ್ಬರ್ಗದಲ್ಲಿ. ಇಪ್ಪತ್ತು ತಿಂಗಳು ಅಧಿಕಾರದಲ್ಲಿದ್ದಾಗ ಒಂದಿನಾನೂ ಹಿಂಗ್ ಬಾಯಿ ಬಿಡಲಿಲ್ಲವಲ್ಲ ಸ್ವಾಮಿ...ಅದಿರ್ಲಿ ಅದ್ಯಾವ ರಾಜಿ ಸಂಧಾನದ ಮೂಲಕ ನಿಮ್ಮೂರಲ್ಲಿ 'ವರಮಹಾಲಕ್ಷ್ಮಿ' ಪೂಜೆ ಮಾಡ್ತಾರೇ ಅಂತ ಸ್ವಲ್ಪ ತಿಳಿಸಿದ್ರೆ ಒಳ್ಳೇದಿತ್ತು. ಧರಮ್ ಸಾಹೇಬ್ರ ನೋಡ್ರೀ ನಿಮ್ ಕಾಲ ಆಗಿ ಆರು ತಿಂಗಳಾತು, ನೀವು ವಿರೋಧ ಪಕ್ಷದ ನಾಯಕರಷ್ಟೇ ಈಗ, ಇನ್ನು ಈ ಜನ್ಮದೊಳಗೆ ಮತ್ತೆ ಮುಖ್ಯಮಂತ್ರಿ ಆಗೋದಿಲ್ಲ ಅಂತ ಗೊತ್ತಿದ್ದೂ ಗೊತ್ತಿದ್ದೂ ಹಿಂಗ್ಯಾಕ ಹುಚ್ಚು ಹುಚ್ಚು ಹೇಳಿಕೆ ಕೊಡ್ತೀರಿ ಸ್ವಾಮಿ!

ಓ, ಈಗ ಗೊತ್ತಾತು ನೋಡ್ರಿ ನಿಮ್ಮ ಹೂಟಿ, ಏನು ಅಂದ್ರ, ಅದೇ ನಮ್ ಗುಂಡೂರಾಯರ ಹೆಂಡತಿ ಹೆಸರು ವರಲಕ್ಷ್ಮಿ, ಅವರೇನಾದ್ರೂ ಸಂಧಾನದ ಪೂಜೆ ಈ ಹಿಂದೆ ಮಾಡಿದ್ದು ತಮ್ಮ ಪಕ್ಷ ಕಾಂಗ್ರೇಸಿನಲ್ಲೇ ನಾಲ್ಕು ದಶಕದಿಂದ ಪಾರ್ಕ್ ಮಾಡಿರೋ ನಿಮಗೇನಾದ್ರೂ ಗೊತ್ತೋ! ವಾವ್, ಧರಮ್ ಅಣ್ಣೋ, ನೀವೆಲ್ಲಿದ್ದ್ರೂ ಪ್ರಚಂಡ್ರೇ ಸೈ, ಅಡ್ಡ ಬಿದ್ದೇ ಗುರುವೇ...

ಅದಿರ್ಲಿ, ನಂಬರ್ ಒನ್ ಸ್ಥಾನದಲ್ಲಿದ್ದ ನಮ್ ಕರ್ನಾಟಕ ಈಗ ಎಲ್ಲೈತಿ ಅಂತೇನಾದ್ರೂ ಗೊತ್ತೇನು?

# posted by Satish : 4:47 am
Comments: Post a Comment



<< Home

This page is powered by Blogger. Isn't yours?

Links
Archives