Wednesday, October 18, 2006

ವೊಲ್ವೋ ಬಸ್ಸಿನ ಒಲವು

ನೋಡಿದ್ರಾ, ಫಸ್ಟ್ ಟೈಮ್ ಈ ಅಂಕಣದಾಗೆ ನಮ್ ರಾಜಕಾರಣಿಗಳನ್ನು ಬಿಟ್ಟು ಯಾವ್ದೋ ಬಸ್ಸಿನ ಬೆನ್ನು ಹಿಡಿದು ನಾನು ಹೊರಟಂತಿದೆ.

ಮತ್ತಿನ್ನೇನಾಗತ್ತೆ ಯಾರ್ ಯಾರು ಎಲ್ಲಿರಬೇಕೋ ಅಲ್ಲಿರಬೇಕಪ್ಪಾ - ಬಸ್ಸುಗಳು ರಸ್ತೆ ಮೇಲೆ, ಮಂತ್ರಿ ಮಾಗಧರು ವಿಧಾನ ಸೌಧದಲ್ಲಿ! ಅದನ್ನ ಬಿಟ್ಟು ಬಡವರ ಮನೆ ಊಟ ಹುಡಿಕ್ಕೊಂಡ್ ಹೋದ್ರೆ ಏನ್ ಬಂತು?

ಅದ್ಸರಿ ವಾಲ್ವೋ ಬಸ್ಸು ಜನ್ರ ಮೇಲೆ, ಫುಟ್‌ಪಾಥ್ ಮೇಲೇನೋ ಹರೀತು, ಅಮಾಯಕರ ಪ್ರಾಣಾನೂ ತೆಗೊಳ್ತು, ಕೊನೆಗೆ ಜನಗಳ ರೋಷಕ್ಕೆ ತನ್ನ ಪ್ರಾಣಾನೇ ಬಿಡ್ತು. ನಲವತ್ತ್ ಐವತ್ತ್ ಲಕ್ಷ ರುಪಾಯ್ ಅನಾವಶ್ಯಕವಾಗಿ ಹಾಳ್ ಮಾಡಿದ್ದೂ ಅಲ್ದೇ ಈಗ ಈ ಸತ್ತೋರ್‌ಗೆಲ್ಲಾ ಸರ್ಕಾರ್‌ದೋರ್ ರೊಕ್ಕಾ ಕೊಡಬೇಕಾಗಿ ಬಂತು ನೋಡ್ರಿ. ಅಂದ್ರ, ಒಬ್ಬ ಡ್ರೈವರ್ ಬ್ರೇಕ್ ಫೇಲ್ ಆತು ಅಂತ ಅಂದಿದ್ದಕ್ಕೆ ಅಥವಾ ಅವನ ಮಿಷ್ಟೇಕ್ ಏನಿದ್ರೂ ಆಮ್ ಜನತಾ ಯಾಕ್ ಅದಕ್ಕ್ ದುಡ್ಡ್ ಕೊಡಬೇಕು? ಎಲ್ಲದಕ್ಕೂ ಸರ್ಕಾರದೋರ್ ಕೊಡಲಿ ಅಂದ್ರ ಅದೇನ್ ಧರ್ಮ ಚತ್ರಾನಾ?

ನಮ್ ಜನಗೊಳಿಗೆ ತಿಳುವಳಿಕೆ ಅನ್ನೋದ್ ಬ್ಯಾಡಾ? ಈ ಕಾರ್ಮಿಕರು ರೋಷಾ ಅನ್ನೋದು ಬಾಳಷ್ಟು ಸಮಸ್ಯೆ ಹುಟ್ಟಿಸಿದ್ರೂ ಯಾರೂ ಯಾಕ್ ಇಂತೋರಿಗೆ ಬುದ್ದಿ ಹೇಳೋಲ್ವೋ? ಇಂಥಾ ಜನಗಳನ್ನ್ ಕಟ್ಟಿಕೊಂಡ್ ಯಾವ್ ಸರಕಾರ ತಾನ್ ಏನ್ ಮಾಡೋಕ್ ಸಾಧ್ಯ? ಮೊದಲು ಜನಗಳು ಬದಲಾಗ್ ಬೇಕ್, ಇಲ್ಲಾ ಇಲ್ಲಾ ಜನಗಳ್ ಮನಸ್ಥಿತಿ ಬದಲಾಗ್ ಬೇಕ್ - ಅಂದ್ರ ಗಾಂಧಿ, ಬುದ್ಧ, ಬಸವಣ್ಣನಂತೋರ್ ಮತ್ತೆ ಹುಟ್ಟಿ ಬರಬೇಕು, ಅವಾಗ್ಲೇ ನೋಡ್ರಿ ನಿಜವಾದ್ ಬದಲಾವಣೆ ಅನ್ನೋದೇನಾದ್ರೂ ಆಗೋಕ್ ಸಾಧ್ಯ.

# posted by Satish : 5:00 pm
Comments:
ಹೌದು, ಈ ಬಸ್ಸುಗಳನ್ನು ಸುಡುವ ಬುದ್ಧಿ ಬೆಂಗ್ಳೂರು ಜನ ಯಾವಾಗ ಬಿಡ್ತಾರೋ ದೇವ್ರಿಗೇ ಗೊತ್ತು.. :-(
 
ಬರೀ ಬೆಂಗ್ಳೂರ್ ಒಂದೇ ಅಲ್ಲಾ ಮೆಡಮ್, ನಮ್ ರಾಜ್ಯ, ದೇಶದ್ ತುಂಬಾನೂ ಹಿಂಗೇ ಇರೋದು, ಯಾವಾಗ ನಮಿಗೆ ಬುದ್ದಿ ಅನ್ನೋದು ಬರುತ್ತೋ ಯಾರಿಗ್ ಗೊತ್ತು?
 
Post a Comment



<< Home

This page is powered by Blogger. Isn't yours?

Links
Archives