Wednesday, December 12, 2007

ಆ ವಯ್ಯಾ ಒಂಥರಾ ಸುಟ್ಟಬದನೇ ಕಾಯಿ ಇದ್ದ ಹಾಗೆ...

ಮೇಷ್ಟ್ರು, ತಿಮ್ಮಕ್ಕ, ನಂಜ ಹಾಗೂ ನಾನು ಎಲ್ಲರೂ ಛಳಿಗಾಲದ ರಜೆಗೆ ಗೂಡು ಸೇರಿಕೊಂಡಿದ್ದೇವೆ - ಯಡಿಯೂರಪ್ಪ, ಪಾಪ ಒಂದೇ ವಾರ ಖುರ್ಚಿ ಮೇಲೆ ಕೂತಿದ್ರು ಅಂತ ತಿಮ್ಮಕ್ಕ ಒಂದೇ ಒಂದು ಕಣ್ಣಿನಿಂದ ಅತ್ತಂತೆ ಮಾಡಿದಳು ಎನ್ನುವುದನ್ನು ಬಿಟ್ಟರೆ ಉಳಿದ ನಾವ್ಯಾರು ಅಷ್ಟೊಂದು ತಲೆಕೆಡಿಸಿಕೊಂಡಂತಿಲ್ಲ.

ಮುಂದಿನ ವರ್ಷ ಬರೋ ಚುನಾವಣೆ ಹೊತ್ತಿಗೆಲ್ಲಾ ಛಳಿ ಕಳೆದುಕೊಂಡ ಕರಡೀ ಹಾಗೆ ನಾವೆಲ್ಲ ಮತ್ತೆ ಬರ್ತೀವಿ ನಮ್ಮ ನಮ್ಮ ವರಸೆಗಳನ್ನ ಬಳಸಿಕೊಂಡು ಮಾತನಾಡಲಿಕ್ಕೆ. ಈ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಗ್ಗೆ ಏನ್ ಬರೆಯೋದು ಆವಯ್ಯಾ ಒಂಥರಾ ಸುಟ್ಟ ಬದನೇಕಾಯಿ ಇದ್ದ ಹಾಗೆ ಅಂತ ನಂಜ ಹೇಳೋದನ್ನ ಕೇಳಿ ನನಗೇ ನಗು ಬಂತು.

ಇನ್ನು ದೊಡ್ಡ ಗೌಡ್ರು ವಿಷ್ಯಾ ಏನ್ ಹೇಳೋಣ ದಿನೇದಿನೇ ಅವರ ನುಣ್ಣನೇ ತಲೆಯ ಹೊಳಪೂ ಹೆಚ್ತಾ ಇರೋದೂ, ದೊಡ್ಡದಾಗಿ ಬೆಳೀತಾ ಇರೋ ಮೂಗಿಗೂ ಹಾಗೂ ಪ್ರಸಕ್ತ ರಾಜಕೀಯ ಸ್ಥಿತಿಗತಿಗೂ ಏನೂ ಸಂಬಂಧವಿಲ್ಲ ಅಂತ ನಾನ್ ಎಷ್ಟು ಸರ್ತಿ ಹೇಳಿದ್ರೂ ಯಾರೂ ನನ್ನ ಮಾತನ್ನ ಕೇಳ್ತಾನೇ ಇಲ್ಲ...

ನೋಡ್ತಾ ಇರಿ, ಮುಂದೇನಾಗುತ್ತೇ ಅಂತ...ಮೇಷ್ಟ್ರು ಎಂದಿನಂತೆ ತಮ್ಮ ಪ್ರಿಡಿಕ್ಷನ್ನ್ ಹುರುಪಿನಲ್ಲಿದ್ರೆ, ನಂಜ ಬಚ್ಚಲು ಮನೆ ಒಲೆಯಲ್ಲಿ ಕಾಲು ಸುಟ್ಟ ಬೆಕ್ಕಿನ ಹಾಗೆ ಕೂತು ಬೀಡಿ ಸೇದ್ತಾ ಇರೋದು ನಿಜವೇ ಹೌದು.

Labels:


# posted by Satish : 12:37 pm
Comments: Post a Comment



<< Home

This page is powered by Blogger. Isn't yours?

Links
Archives