Friday, September 15, 2006

ಒಂದಲ್ಲಾ, ಎರಡಲಾ ಮೂರಂತ್ರೀ...

ನಮ್ ಕರ್ನಾಟಕದ ಮಂದೀ ಅಂದ್ರ ಮಹಾ ನಾಟಕದ ಮಂದಿ ನೋಡ್ರಿ, ಅದಕಾ ಐವತ್ತು ವರ್ಷದ ಹಿಂದ 'ಕರ್ನಾಟಕ' ಅಂತ ಹೆಸರು ಇಟ್ಟಾರೇನೋ ಅಂತ ನನಗೂ ಎಷ್ಟೊ ಸರ್ತಿ ಅನುಮಾನ ಬಂದತಿ. ಇಲ್ಲಾ ಅಂದ್ರ ಇವ್ರು ಯಾಕ್ ಹಿಂಗ್ ಆಡತಿದ್ರೂ ಅಂತ ನೀವಾರ ಒಸಿ ಕೇಳ್ರಲ್ಲಾ. ರೆಡ್ಡಿ ಮೊದಲು ಸಿಡಿ ತೋರಿಸ್ತೀನಿ ಅಂತ ಮೂಗಿಗೆ ತುಪ್ಪಾ ಸವರಿ ತನ್ ಕೆಲ್ಸಾ ತಾನ್ ಸಾಧಿಸಿಕಂಡನೋ, ಈಗಂತು ನಾಚಿಗ್ಗೆಟ್ಟೊರ್ ಹಂಗ ಡೈರೆಕ್ಟಾಗಿ ಪತ್ರಿಕ್ ಗಳಿಗೇ ಸಿಡಿ ಹಂಚೋ ವ್ಯವಸ್ಥೆ ನಡದತೇತಂತೆ. ಸ್ವಲ್ಪನಾರೂ ಕಬರು ಅನ್ನದ್ ಬ್ಯಾಡಾ ಇವರಿಗೆ? ಅಲ್ಲಪಾ, ಅಕಸ್ಮಾತ್ ಅದರಾಗ್ ಇರೋದ್ ನಿಜಾನೆ ಅಂತ ಅಂದ್ಕೊಳನಾ, ಈ ಪತ್ರಿಕ್ ಗೊಳಿಗೆ ದಮ್ ಇರತೇತೇನೂ ಅದನ್ನ ಹೆಂಗೈತೆ ಹಂಗೆ ಪಬ್ಲಿಷ್ ಮಾಡಾಕೇ?

ಒಂಥರಾ ಬಾಳಾ ಕ್ರಿಯೇಟಿವ್ ಮಂದಿ ಇವ್ರು ಅನ್ನೋದೇನೋ ನಿಜಾ, ಯಾಕಂದ್ರ ಒಳ್ಳೇದೂ ಕೆಟ್ಟದ್ದು ಎಲ್ಲಾ ಕೂಡೇ ಮಿಕ್ಸ್ ಮಾಡಿ ವಿಡಿಯೋ ತೆಗೆದು ಅದರ ಸಂಭಾಷಣೇ ಸಾರಾನೂ ಬರೆದು ಕೊಟ್ಯಾರಂತ. ನನ್ ಕೇಳಿದ್ರೆ ನೋಡ್ರಿ ಇವರ್ನೆಲ್ಲಾ ಒಟ್ಟಿಗೇ ಸೇರ್ಸಿ ಜೈಲಿನ್ಯಾಗ್ ಕೂಡಬಕು, ಒಂಥರಾ ನಮ್ ಇಂದ್ರಾ ಗಾಂಧಿ ಕೂಡಿದ್ಲಲ್ಲ ೭೭ ರಾಗ, ಹಂಗ.

ದೊಡ್ಡಾ ಗೌಡ್ರು ಬಲಭೀಮನ್ ಥರಾ ಸಡ್ಡು ಹೊಡ್ದು ಹೇಳವ್ರಂತೆ 'ನನ್ ಮಗನ್ ಮುಟ್ಟೋಕ್ ಬಂದೋರ್ ಕಥಿ ಮುಟ್ಟುಸ್ ಬಿಡ್ತೀನಿ' ಅಂತ, ಇತ್ಲಾಗ ಕುಸಾ ಸಾಹೇಬ್ರೂ ಚಪಲ ಚೆನ್ನಿಗಪ್ಪನಿಗೆ 'ಅಯ್ಯೋ, ನಮ್ಮೋರೇ ಬಿಡು...' ಅಂತ ಅಭಯ ಕೊಟ್ಟೋರಂತೆ.

'ಒಂದಲ್ಲಾ, ಎರಡಲ್ಲಾ, ಮೂರಂತ್ರೀ...ಹೊರಗ್ ಬರೋ ಸಿಡಿಗಳು ಎಷ್ಟೇ ಬಂದ್ರೂ ನಮ್ಮನ್ನೇನೂ ಮಾಡಕ್ಕಾಗಲ್ಲ...' ಅಂತ ಯಾರೋ ನಕ್ಕಂಗ್ ಕೇಳ್ತು, ಕುಸಾ ನಮ್ಮನಿ ಒಳಗ ಯಾತಕ್ಕ್ ಬಂದಾರ ಅಂತ ಪೇಪರ್ ಸರಿಸಿ ನೋಡಿದ್ರ, ಅಲ್ಲಿ ಕಂಡೋನು ಇನ್ಯಾರೂ ಅಲ್ಲಾ ನಮ್ ಟೈಲರ್ ಬಾಬಣ್ಣ, ಇವನೊಳ್ಳೇ ಸಮಯಕ್ ಬಂದಾ ಅಂತ 'ಏ ಹೊಸ ಸಿಡಿ ವಿಷ್ಯಾ ನಿನಗೇನಾರಾ ಗೊತ್ತಾ?' ಅಂತ ಕೇಳಿದ್ದಕ್ಕೆ 'ಅಲ್ರೀ ಸವಕ್ಕಾರ್ರೇ, ಅವರಿಗ್ ಕೆಲಸಿಲ್ಲಾ ಅಂತ ನನಗೂ ಕೆಲ್ಸಿಲ್ಲಾ ಅಂತ ತಿಳಕಂಡೀರೇನೂ?' ಅಂತ ನನ್ನೇ ಪ್ರಶ್ನೇ ಕೇಳೋದೇ!

'ಸರಿ ಹೋಯ್ತು, ಹೊಸ ವಿಷ್ಯಾ ತಿಳಕಂಬಕು, ಅದರಾಗೇನ್ ತಪ್ಪು?' ಅಂತ ಸ್ವಲ್ಪ ಗಟ್ಟಿಯಾಗ್ ಕೇಳಿದ್ದಕ್ಕೆ 'ಏ, ನಿಮಗ್ಗೊತ್ತಾಗಂಗಿಲ್ಲ ಬಿಡ್ರಿ' ಅಂತಾ ಅಂದು ಹಿಂತಿರುಗೂ ನೋಡ್ದೇ ಹೋಗೇ ಬಿಟ್ಟ.

# posted by Satish : 12:03 pm
Comments:
ರಾಜಕೀಯ ಅಂದರೆ ತುಂಬಾ ಆಸಕ್ತಿ ಅನ್ನಿಸತ್ತೆ ನಿಮಗೆ. ಬರೀ ಆ ಬಗ್ಗೆನೇ ಹೆಚ್ಚಾಗಿ ಬರೆದಿದ್ದೀರಿ.

ಧಾರವಾಡದವರೇನ್ರಿ ನೀವು?
 
ಹೌದು ಮೆಡಮ್, ನಮ್ ರಾಜ್ಯದ ರಾಜಕಾರಣದಲ್ಲಿ ಬಹಳಷ್ಟು ಆಸಕ್ತಿ ನನಗೆ.

ನಮ್ಮೂರು ಧಾರವಾಡ ಖಂಡಿತ ಅಲ್ಲ, ಈ ಬಯಲ್ ಸೀಮೆ ಭಾಷೆ ಬಗ್ಗೆ ನನಗೆ ಅಪಾರ ಪ್ರೇಮ, ಅದರಲ್ಲಿ ಮನಸ್ಸಿಗೆ ನಾಟುವಂತೆ ಮಾತನಾಡಬಹುದು ಅನ್ನೋದು ಅನ್ನ ಅಭಿಪ್ರಾಯ ಅಥವಾ ರೂಢಿ!
 
nimaga namma kaDe bhashe myagina preeti kaMdu barobbari khushiyatri nodrapa..
 
ಜನಾರ್ದನ ರೆಡ್ಡಿಯೋರು ಈಗ ಕಲ್ಲು-ಹಾಳು ಮೂಳು ಗಣಿಗಾರಿಕೆ ಬಿಟ್ಟು ಸಿಡಿ ಗಣಿಗಾರಿಕೆಗೆ ತೊಡಗಿದ್ದಾರಂತಲ್ಲಾ... ಕಾಳೂ ಅವರೆ,!
 
ನಿಮ್ಮ ರಾಜಕೀಯ ಆಸಕ್ತಿ ಹೀಗೆ ಮುಂದುವರಿಯಲಿ. ಒಂದಿನ ನೀವೇ ಮುಖ್ಯ ಮಂತ್ರಿ ಆದರೂ ಆಗಬಹುದು :)

ನನಗಂತೂ ಈ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲ. ಈಗ ದಿನಕ್ಕೊಂದು ಸಿಡಿ ಬರ್ತಾ ಇದೆಯಲ್ಲ. ಯಾರಿಗಾದರೂ ನಿಜವಾದ ಕಾಳಜಿ ಅನ್ನೊದು ಇದ್ರೆ, ಸತ್ಯ ಏನು ಅಂತ ಪತ್ತೆ ಮಾಡೋದು ಏನೇನು ಕಷ್ಟ ಅಲ್ಲ. ಆದರೂ ಯಾಕೆ ಮಾಡ್ತಾ ಇಲ್ಲ ಹೇಳಿ?
 
ಮಹಾಂತೇಶೋರೇ,
ಆ ಭಾಸಿ ಮಾತಾಡೋ ಜನ ಅಂದ್ರ ನನಗ ಅಗದಿ ಇಷ್ಟಾ ರೀ! ನೀವೂ ಹಂಗಾ ಮಾತಾಡ್ರಿ, ಮತ್ತ ಬರೀರಿ!

ಅನ್ವೇಷ್ ಸ್ವಾಮೇರೇ,
ಅತ್ಲಾಗ ಮ್ಯೂಸಿಕ್ ಸಿಡಿ ಹೊರಗ ತಂದಿದ್ರೆ ನಾವಾರೂ ಒಂದಿಷ್ಟು ಕೇಳಿ ಸುಖಾ ಪಡತಿದ್ವಿ, ಈ ದೊಡ್ಡಾಟನ ನೋಡೋಕ್ ಯಾರ್ ಹತ್ರ ಟೈಮ್ ಐತಿ ಹೇಳ್ರಿ?

sritri ಮೆಡಮ್,
ನಿಮಗ ನಮ್ಮನ್ ಕಂಡ್ರು ಆಗಂಗಿಲ್ಲಾ ಅಂದ್ರ ಎರಡು ಕಪಾಳಕ್ ಬಿಗೀರಿ, ಆದ್ರ ಹಿಂಗ ಮುಖ್ಯಮಂತ್ರಿ ಆಗು ಅಂದು ಅವಮಾನ ಮಾಡಬ್ಯಾಡ್ರೀ!

ರಾಜ್‌ಕಾರಣಿಗಳ ಮ್ಯಾಲ ನಂಬಿಕಿ ಹಂಗ್ ಕಳಕಂಬಾರ್ದು, ಅವ್ರೂ ಸಹ ನಮ್ ವ್ಯವಸ್ಥೆ ಒಂದ್ ಭಾಗಾ ಅಲ್ಲಾ, ಅಂದ್ರ ನಾವ್ ವ್ಯವಸ್ಥೀನಾ ಬಿಡಕ್ಕಾಗತ್ತೇನು? ಸತ್ಯ ಇವತ್ತಲ್ಲ ನಾಳಿ ಗೊತ್ತಾಕ್‌ತತೀ, ಕಾಯೋಣಂತ.
 
kALuvare!!!!
nAnu mATaDode haMga..beMgaLurugi baMdya myale oMdu swalp faraka agide bhashe...adru namma side bhyasha naanu biDodilla biDi...
 
ಯಾವತ್ತಿಗೂ ನಮ್‌ತನ ಅನ್ನೋದ್ ಇರಬಕು.

'ಕಾಲಚಕ್ರ'ದೊಳಗೆ ಆಡ್ ಮಾತ್‌ನ್ಯಾಗ ಬರದ್ರ ಚೆಂದ ಅಂತ ಅನ್ನುಸ್ತು, ನೀವೇನಂತೀರಿ.

ಆದ್ರ ಜಾಸ್ತಿ ಜನ ಓದಂಗಿಲ್ಲ ಅನೋದೊಂದೇ ಬೇಜಾರ್ ನೋಡ್ರಿ.
 
Post a Comment



<< Home

This page is powered by Blogger. Isn't yours?

Links
Archives